ಲ|| ಡಾ|| ಎಂ.ಕೆ. ಭಟ್, 317ಸಿ ಜಿಲ್ಲಾ ಗೌರ್ನರ್ ರವರ ಅಧಿಕೃತ ಭೇಟಿ ಸಂದರ್ಭದಲ್ಲಿ ಉಚಿತ ಶ್ರವಣ ದೋಷ ತಪಾಸಣಾ ಶಿಬಿರ ಹಾಗೂ ಉಚಿತ ಶ್ರವಣ ಯಂತ್ರ ವಿತರಣೆ ಮಾಡಲಾಗುವುದು.
ಶ್ರವಣ ದೋಷವುಳ್ಳವರು ಹಾಗೂ ವಾಕ್ ಸಮಸ್ಯೆಯುಳ್ಳವರಿಗೆ ಉಚಿತವಾಗಿ ತಪಾಸಣೆಯನ್ನು (ಆಡಿಯೋಗ್ರಾಮ್) ಮಾಡಿ ಅವರ ಸಮಸ್ಯೆಯನ್ನು ಪರಿಹರಿಸಲು ಸ್ಪೀಚ್ ಥೆರಪಿಯ ಮಾರ್ಗದರ್ಶನ ಹಾಗೂ ಸೂಕ್ತವಾದ ಶ್ರವಣ ಯಂತ್ರಗಳನ್ನು ಪಡೆಯುವದಕ್ಕೆ ಮಾರ್ಗದರ್ಶನ ನೀಡಲಾಗುವುದು, ಹಿರಿಯರಿಗೆ, ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಉಚಿತವಾಗಿ ಶ್ರವಣ ಯಂತ್ರವನ್ನು ನೀಡಲಾಗುವುದು.
ದಿನಾಂಕ: 08-04-2022 ರ ಶನಿವಾರ
ಸಮಯ : ಮಧ್ಯಾಹ್ನ 12-00 ರಿಂದ ಸಂಜೆ 5-00 ರ ವರೆಗೆ
ಶಿಬಿರದ ಸ್ಥಳ : ಲಯನ್ಸ್ ಕ್ವೆಸ್ಟ್ ವಾಕ್ ಮತ್ತು ಶ್ರವಣ ಕೇಂದ್ರ
(ಕ್ವೆಸ್ಟ್ ಸ್ಪೀಚ್ & ಹೀಯರಿಂಗ್ ಸೆಂಟರ್)
ಪಿ.ಜೆ. ಬಡಾವಣೆ, 3ನೇ ಮುಖ್ಯರಸ್ತೆ, ಶುಶ್ರೂತ
ಕಣ್ಣಿನ ಆಸ್ಪತ್ರೆ ಎದುರು, ಮಹಡಿ ಮೇಲೆ, ದಾವಣಗೆರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ|| ಎನ್.ಆರ್. ನಾಗಭೂಷಣರಾವ್, ಅಧ್ಯಕ್ಷರು, ಲಯನ್ಸ್ ಕ್ಲಬ್ ಆಫ್, ದಾವಣಗೆರೆ ಇವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಲ|| ಡಾ|| ಎಂ.ಕೆ. ಭಟ್, ಜಿಲ್ಲಾ ಗವರ್ನರ್, ಜಿಲ್ಲಾ 317ಸಿ ಆಗಮಿಸಲಿದ್ದಾರೆ. ಆಸಕ್ತರು ಲಯನ್ ಸುಬ್ಬರಾಜ್ ಟಿ.ವಿ., ವಾಕ್ ಮತ್ತು ಶ್ರವಣ ದೋಷ ತಜ್ಞರು, ಮೊ: 9743780492 ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.
(ಲಯನ್ ಕಣವಿ ನಟರಾಜ್)
ಕಾರ್ಯದರ್ಶಿ
ಲಯನ್ಸ್ ಕ್ಲಬ್, ದಾವಣಗೆರೆ.
(ಎನ್.ಆರ್. ನಾಗಭೂಷಣರಾವ್)
ಅಧ್ಯಕ್ಷರು
ಲಯನ್ಸ್ ಕ್ಲಬ್, ದಾವಣಗೆರೆ.