ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ದರೋಡೆ ಮಾಡಿದ್ದ 05 ಜನರ ಬಂಧನ.

ನಮ್ಮ ದಾವಣಗೆರೆ ನ. 08: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ವ್ಯಾಪಾರಿ ಸುರೇಶ ಎ.ಎಂ (30 ವರ್ಷ) ತಮ್ಮ ಸ್ನೇಹಿತರೊಂದಿಗೆ ತಾನು ಖರೀದಿಸಿದ್ದ ಹೊಸ ಮಹೇಂದ್ರ ಜಿತೋ ಪ್ಲಸ್ ಗೂಡ್ಸ್ ವಾಹನಕ್ಕೆ ಬಾಡಿಕಟ್ಟಿಸಿಕೊಂಡು ಬರಲು ಚಿಕ್ಕನಾಯಕನಹಳ್ಳಿಯಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದಾಗ ದಾವಣಗೆರೆ ತಾಲ್ಲೂಕು ಆನಗೋಡ ಹತ್ತಿರ ಹೈವೆ ರಸ್ತೆಪಕ್ಕದಲ್ಲಿನ ಸರ್ವೀಸ್ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದರು. ಆಗ ಅಪರಿಚಿತ 05 ರಿಂದ 06 ಜನ ದುಷ್ಕರ್ಮಿಗಳು ಆಟೋವೊಂದರಲ್ಲಿ ಬಂದು ಚಾಕುವನ್ನು ತೋರಿಸಿ 15,000 ರೂ. ನಗದು ಹಣ ಮತ್ತು 20,000 ಮೌಲ್ಯದ ಎರಡು ರೆಡ್.ಮಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು. 

ದರೋಡೆ ಪ್ರಕರಣದ ಆರೋಪಿಗಳಾದ 1) ಕುಮಾರ ಬಿ. (26) ಮೊಬೈಲ್ ಸರ್ವಿಸ್ ಕೆಲಸ, ದಾವಣಗೆರೆ, 2) ಮಂಜುನಾಥ ಯು.ಎಸ್ (24), ಆಟೋ ಡ್ರೈವರ್, ದಾವಣಗೆರೆ,‌ 3) ಪ್ರವೀಣ್ ಕುಮಾರ ಎ.ಬಿ (22) ಡ್ರೈವರ್, ಅಣಬೇರು ಗ್ರಾಮ, ದಾವಣಗೆರೆ ತಾಲ್ಲೂಕು 4) ಪರಶುರಾಮ (19), ಅಣಬೇರು ಗ್ರಾಮ, ದಾವಣಗೆರೆ ತಾಲ್ಲೂಕು., 5) ಶಿವಕುಮಾರ ಡಿ (21) ಬಾಡಾ ಗ್ರಾಮ, ದಾವಣಗೆರೆ ತಾಲ್ಲೂಕು‌ ಇವರುಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು. ಈ ಪ್ರಕರಣದ ಆರೋಪಿ ಪತ್ತೆಗಾಗಿ ಡಿಸಿಆರ್‌ಬಿ ಡಿವೈಎಸ್ಪಿ ಬಿ ನಾಗಪ್ಪ ಮತ್ತು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ. ಎಸ್ ನೇತೃತ್ವದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು, ಈ ತಂಡವು ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು. ಕಾರ್ಯಾಚರಣೆ ನಡೆಸಿದ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಎಂ ಸಂತೋಷ ಶ್ಲಾಘಿಸಿದ್ದಾರೆ. ಸಿಬ್ಬಂದಿಗಳಾದ ಮಜೀದ್ ಕೆ. ಸಿ., ಆಂಜನೇಯ, ಸುರೇಶ, ಮಾರುತಿ, ರಾಘವೇಂದ್ರ, ಅಶೋಕ್, ಬಾಲಾಜಿ ಇನ್ನೂ ಮುಂತಾದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

 

Leave a Reply

Your email address will not be published. Required fields are marked *

error: Content is protected !!