ನಮ್ಮ ದಾವಣಗೆರೆ ಮಾ. 27: ಕರ್ನಾಟಕದ ದಿನಪತ್ರಿಕೆ ಕನ್ನಡಪ್ರಭ ಹಾಗೂ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ನಾಗರಾಜ ಶೆಟ್ಟಿ ಡಿ. ವಿ. ಕಾರ್ಯದರ್ಶಿ, ಯುರೋ ಕಿಡ್ಸ್ ಮತ್ತು ಯುರೋ ಶಾಲೆ ಹಾಗೂ ಅಧ್ಯಕ್ಷರು ಚಾಣುಕ್ಯ ಪೂರ್ವ ವಿಶ್ವವಿದ್ಯಾಲಯ ಮತ್ತು ಪಿಯು ಕಾಲೇಜು, ದಾವಣಗೆರೆ ದಾವಣಗೆರೆ. ಇವರ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ದುಬೈ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್ಸ್ 2024 ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಾರ್ಚ್ 28, 2024 ರಂದು ದುಬೈನ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿದೆ. ನಿಮ್ಮ ಸೇವೆ ಸದಾಕಾಲ ನಮ್ಮ ರಾಜ್ಯಕ್ಕೆ ದೊರಕಲಿ ಹಾಗೂ ನಿಮ್ಮ ಕೀರ್ತಿ ಗೌರವಗಳು ಹೀಗೆ ಎತ್ತರಕ್ಕೆ ಬೆಳೆಯುತ್ತಿರಲಿ ಎಂದು ಹಲವರ್ರು ಜನ ಗಣ್ಯರು ಹಾರೈಸಿದ್ದಾರೆ.