ಜನನಿ ಸ್ವಯಂಸೇವಾ ಸಂಘ ವತಿಯಿಂದ ಶ್ರೀರಾಮ ಹೆಸರಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.

ಅಯೋಧ್ಯೆ ರಾಮಮಂದಿರವು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಅಯೋಧ್ಯೆಯನ್ನು ಭಗವಾನ್ ರಾಮನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ಆದ್ದರಿಂದ ಇದನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಸಂತೋಷದ ಕ್ಷಣವನ್ನು, ಇಂದು ಜನನಿ 11 ಸದಸ್ಯರು ಸ್ವಯಂಪ್ರೇರಿತ ರಕ್ತದಾನ ಮಾಡುವುದರ ಮೂಲಕ ಸಂಭ್ರಮಿಸಿದರು..
ಜನನಿ ಸ್ವಯಂಸೇವಾ ಸಂಘದ ಪದಾಧಿಕಾರಿಗಳಾದ ಮಂಜುನಾಥ.ಬಿ, ನಾಗಲಿಂಗಪ್ಪ.ವೈ.ಎಸ್, ಮೂರ್ತಿ.ಆರ್, ಚಂದ್ರಶೇಖರ ಗೌಡ ಕೆ.ಜಿ, ಬಸವರಾಜ್ ಎಸ್, ಚಂದ್ರಶೇಖರ್.ಹೆಚ್, ಶಿವರಾಜ್.ಎಸ್, ಮತ್ತು ಪರಮೇಶ್ ಬೇಸ್ಕಾಂ,ಮೃತ್ಯುಂಜಯ, ಚೇತನ್, ವೆಂಕಟೇಶ್,ಅನೀಲ್ ಭಾಗವಹಿಸಿ ರಕ್ತದಾನ ಮಾಡಿದ್ದಾರೆ.

ವೈದ್ಯಕೀಯ ತಪಾಸಣೆಯಲ್ಲಿ ಹನುಮಂತಪ್ಪ.ಪಿ, ಸಿದ್ದೇಶ್ವರ, ಮಂಜುನಾಥ್.ಡಿ.ಆರ್, ಮಹೇಶ, ಮಂಜುನಾಥ ಹೆಚ್. ಇವರಿಗೆ ರಕ್ತದಾನ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!