ಭಾರತೀಯ ಜನತಾ ಪಕ್ಷದ ರಾಜಸ್ಥಾನದ ಸಂಸದ ಕಿರೋಡಿ ಲಾಲ್ ಮೀನಾ ಅವರು ತೀವ್ರ ವಿರೋಧದ ನಡುವೆ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಸೂದೆಯಾಗಿ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ 2020 ಅನ್ನು ಮಂಡಿಸಿದರು, ವಿರೋಧಪಕ್ಷ ಗಳಿಂದ ಈ ಮಸೂದೆಗೆ ಭಾರಿ ಗೊಂದಲವುಂಟಾಯಿತು. ಏಕರೂಪ ನಾಗರಿಕ ಸಂಹಿತೆ ಮಸೂದೆ ಧರ್ಮ ಆಧಾರಿತ ವೈಯಕ್ತಿಕ ಕಾನೂನುಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ ಎಂದು ಆಡಳಿತ ಪಕ್ಷದ ಮೇಲೆ ಹರಿಹಾಯ್ದವು.
ಮಸೂದೆಯನ್ನು ವಿರೋಧಿಸಲು ಮೂರು ನಿರ್ಣಯಗಳನ್ನು ಮಂಡಿಸಲಾಯಿತು, ಇದು ದೇಶವನ್ನು ವಿಘಟಿಸುತ್ತದೆ ಮತ್ತು ಅದರ ವೈವಿಧ್ಯಮಯ ಸಂಸ್ಕೃತಿಯನ್ನು ಘಾಸಿಗೊಳಿಸುತ್ತದೆ ಎಂದು ಈ ಮಸೂದೆ ಹೇಳುತ್ತದೆ ಎಂದರು, ನಂತರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದರು, ಅಲ್ಲಿ 63-23 ಮತಗಳ ಮೂಲಕ ಈ ಮಸೂದೆಯ ನಿರ್ಣಯವನ್ನು ಎತ್ತಿ ಹಿಡಿಯಲಾಯಿತು.
ವಿವಿಧ ಸಮುದಾಯಗಳೊಂದಿಗೆ ವ್ಯಾಪಕವಾದ ಸಾರ್ವಜನಿಕ ಸಮಾಲೋಚನೆಯಿಲ್ಲದೆ ಈ ಮಸೂದೆಯನ್ನು ಪರಿಚಯಿಸಲಾಗುವುದಿಲ್ಲ ಎಂದು ವಿರೋಧ ಪಕ್ಷದ ಸಂಸದರು ವಾದಿಸಿದರು.
ಬಿಜೆಪಿ ತನ್ನ ಗುಜರಾತ್ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿ ಪರಿಚಯಿಸುವುದಾಗಿ ಭರವಸೆ ನೀಡಿತ್ತು ಮತ್ತು ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ಒಂದು ದಿನದ ನಂತರ ಮೇಲ್ಮನೆಯಲ್ಲಿ ಮಸೂದೆಯನ್ನು ಮಂಡಿಸಲಾಗಿದೆ.