ಇಂದು ಮಧ್ಯಾಹ್ನ ಉದಯಪುರದ ಜನನಿಬಿಡ ಮಾರುಕಟ್ಟೆಯಲ್ಲಿ ಕನ್ಹಯ್ಯಾ ಲಾಲ್ ಅವರ ಅಂಗಡಿಗೆ ನುಗ್ಗಿದ ಇಬ್ಬರು ವ್ಯಕ್ತಿಗಳು, ಅನೇಕ ಬಾರಿ ಚಾಕುವಿನಿಂದ ಆತನನ್ನು ಇರಿದು ಕತ್ತು ಸೀಳಿ ಕೊಂದಿದ್ದರು ಮತ್ತು ಅದನ್ನು ವಿಡಿಯೋ ಸಹಿತ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಕೊಲೆಗಡುಕರಾದ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ನನ್ನ ಬಂಧಿಸಲಾಗಿದೆ. 24 ಗಂಟೆಗಳ ಕಾಲ ರಾಜಸ್ಥಾನದಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.
ಎಲ್ಲಾ ಪೊಲೀಸರ ರಜೆಯನ್ನು ರದ್ದುಗೊಳಿಸಲಾಗಿದೆ ಮತ್ತು ಉದಯಪುರ ಹೈ ಅಲರ್ಟ್ ನಲ್ಲಿಡಲಾಗಿದೆ ಎಂದಿದ್ದಾರೆ.