ದಾವಣಗೆರೆಯ ಈಜುಕೊಳದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು.

ನಮ್ಮ ದಾವಣಗೆರೆ: ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ 5 ಕೋಟಿ ವೆಚ್ಚದಲ್ಲಿ ನವೀಕರಣಗೊಂಡು ಲೋಕಾರ್ಪಣೆಗೊಂಡಿದ್ದ ದಾವಣಗೆರೆ ದೇವರಾಜ ಅರಸು ಬಡಾವಣೆಯಲ್ಲಿನ ಈಜುಕೊಳದಲ್ಲಿ ಇಬ್ಬರು ಹುಡುಗರು ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದಾರೆ.

ಬಟ್ಟಿ ಲೇಔಟ್ ನ ಮುಕ್ತಿಯಾರ್ ಅವರ ಪುತ್ರ ಮುಬಾರಕ್ (15), ಹಾಗೂ ನಿಸಾರ್ ಅಹಮದ್ ಅವರ ಪುತ್ರ ತಾಜುದ್ದೀನ್ (16) ಎಂದು ಗುರುತಿಸಲಾಗಿದೆ, ಶುಕ್ರವಾರ ಮಧ್ಯಾಹ್ನ 4 ಘಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. 

ಈಜು ಬಾರದಿದ್ದರೂ ಅವರು ಮೇಲಿನಿಂದ ನೀರಿಗೆ ಹಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಈಜುಕೊಳದಲ್ಲಿ ಯಾವುದೇ ಮಾರ್ಗದರ್ಶಕರು ಇರಲಿಲ್ಲ ಎನ್ನಲಾಗುತ್ತಿದೆ. ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಸಿಸಿಟಿವ್ ಕ್ಯಾಮೆರಾಗಳ ಮೂಲಕ ಪರಿಶೀಲನೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!