ನಮ್ಮ ದಾವಣಗೆರೆ ಸೆ. 20: ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ, ಕಂಚಿಕೆರೆ ಗ್ರಾಮದ ಶ್ರೀ ಸಿರಸಂಗಿ ಕಾಳಮ್ಮನ ದೇಗುಲಕ್ಕೆ ದಿನಾಂಕ: 20/09/2023 ರ ಶುಭ ಬುಧವಾರದಂದು ಪೂಜ್ಯ ಶ್ರೀ ಶ್ರೀ ಶ್ರೀ ಬಸವರಾಜ ಗುರೂಜಿ, ಶ್ರೀ ಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿರವರು ಆಗಮಿಸಿ, ಶ್ರೀಕ್ಷೇತ್ರ ಶ್ರೀ ಸಿರಸಂಗಿ ಕಾಳಮ್ಮ ದೇವಿಗೆ ಪೂಜ್ಯರಿಂದ ದೇವಿಗೆ ದೇಗುಲಕ್ಕೆ ಗಂಗಾಜಲದಿಂದ ಪ್ರೋಕ್ಷಿಸಿ, ವಿಶೇಷವಾಗಿ ಪೂಜೆ, ಮಹಾಮಂಗಳಾರತಿಯು ನಡೆಯಿತು ಮತ್ತು ಈ ಕ್ಷೇತ್ರಕ್ಕೆ ಮುಖ್ಯವಾಗಿ ಅಭಿವೃದ್ಧಿ, ಏಳಿಗೆ ಮತ್ತು ಉನ್ನತಿ ಮತ್ತು ಭಕ್ತರ ಸೇವೆಯನ್ನು ಮಾಡುತ್ತಿರುವ ಹಾಗೂ ದೇವಿಯ ಆರಾಧಕರಾಗಿರುವ ಶ್ರೀ ಪ್ರಕಾಶಪ್ಪ, ಶ್ರೀಮತಿ ಕಾಳಮ್ಮ ರವರಿಗೆ ಪೂಜ್ಯರು ಅಭಿನಂದನೆಯನ್ನು ಸಲ್ಲಿಸಿ ಶಾಲು ಹೊದಿಸಿ ಹೂಮಾಲೆಯಿಂದ ಸನ್ಮಾನಿಸಿ ‘ಸದಾ ನಿಮಗೂ, ಮಕ್ಕಳಿಗೂ, ಮೊಮ್ಮಕ್ಕಳಿಗೂ, ಸಕುಟುಂಬ ಪರಿವಾರದವರೆಲ್ಲರಿಗೂ ಶ್ರೀ ವೀರಾಂಜನೇಯ ಸ್ವಾಮಿ ನಿಮಗೆ ಆರೋಗ್ಯ, ಐಶ್ಚರ್ಯ, ಭಾಗ್ಯ ಸದಾ ನಿಮಗೆ ಕರುಣಿಸಲೆಂದು ಆಶೀರ್ವದಿಸಿದರು. ಈ ಶುಭ ದಿನದಂದು ಶ್ರೀಮತಿ ಮಲ್ಲಮ್ಮ ಪ್ರಕಾಶಪ್ಪ, ಶ್ರೀ ಪ್ರಕಾಶಪ್ಪ, ಶ್ರೀಮತಿ ಕಾಳಮ್ಮ, ಶ್ರೀ ಯಶವಂತ, ಶ್ರೀ ಸಂಗಪ್ಪ ತೋಟಾದ್ ಶಾಮನೂರು, ಶ್ರೀ ಬಸವರಾಜ ಅರಸಿಕೆರೆ, ಶ್ರೀ ಸಂತೋಷಕುಮಾರ್ ಬಿ., ಸಿವಿಲ್ ಕಾಂಟ್ರಾಕ್ಟರ್ ಮತ್ತು ಗ್ರಾಮಸ್ಥರು, ಭಕ್ತರು ಇನ್ನಿತರರು ಉಪಸ್ಥಿತರಿದ್ದರು.