ನಾಳೆ ದಾವಣಗೆರೆಯ ವಿವಿಧಕಡೆ ವಿದ್ಯುತ್ ವ್ಯತ್ಯಯ

ನಮ್ಮ ದಾವಣಗೆರೆ ಡಿ.26:  ಜಲಸಿರಿ ಯೋಜನೆ ಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.11 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಮ್.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಎಮ್ ಸಿ ಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಶಾಮನೂರರೋಡ್, ಬಿಐಇಟಿಕಾಲೇಜ್, ಗ್ಲಾಸ್ಹೌಸ್, ಬಾಪೂಜಿ ಸಮುದಾಯ ಭವನ, ಅಂಗವಿಕಲಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ನಗರದ ಉಪವಿಭಾಗ-2, ಘಟಕ-4ರ ವ್ಯಾಪ್ತಿಯ ಚಲವಾದಿ ಕೆರೆ, ಎಮ್ ಬಿ ಕೆರೆ, ಹೊಂಡಾ ಸರ್ಕಲ್, ಜಾಲಿನಗರ, ಶಿವಾಜಿ ನಗರ, ತ್ಯಾಪೆರಗಲ್ಲಿ, ದೇವಸ್ಥಾನ ಸುತ್ತ-ಮುತ್ತ, ಕಾಡಪ್ಪನಕಣ ಹಾಗೂ ಸುತ್ತ-ಮುತ್ತ, 250ಕೆವಿಎ ಕೃಷ್ಣಭವಾನಿ ಕಬ್ಬಿಣ ಕಂಬಗಳಿರುವ ಪರಿವರ್ತಕದ ಬದಲಾವಣೆಯ ಕೆಲಸ ಇರುವುದರಿಂದ ಜ.11 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!