ಇಂದು ದಾವಣಗೆರೆಯ ಸಂತ ಪೌಲರ ಸೆಂಟ್ರಲ್ ಸ್ಕೂಲ್ ನಲ್ಲಿ ಪದವಿದಾನ (ಇನ್ವೆಸ್ಟಿಟೂರ್) ಸಮಾರಂಭ ಜರುಗಿತು. ವಿದ್ಯಾರ್ಥಿಗಳಿಗೆ ನಾಯಕಿ ಮತ್ತು ಉಪನಾಯಕಿ ಪದವಿಗಳನ್ನು ಇಂದು ಪ್ರಧಾನ ಮಾಡಲಾಯಿತು. ಪದವಿದಾನ (ಇನ್ವೆಸ್ಟಿಟೂರ್) ಸಮಾರಂಭವು ಒಂದು ಪ್ರಮುಖ ಸಂದರ್ಭವಾಗಿದ್ದು, ಶಾಲೆಯು ತನ್ನ ಮುಂಬರುವ ನಾಯಕರಿಗೆ ಕೆಲವು ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಡುತ್ತದೆ. ಇಂದಿನ ಮಕ್ಕಳೇ ಮುಂದೆ ನಾಯಕರಾಗಿ ಬೆಳೆಯಲು ಸಹಕಾರಿಯಾಗುತ್ತದೆ ಹಾಗಾಗಿ ಮಕ್ಕಳಿಗೆ ಜವಾಬ್ದಾರಿಯ ನಿಯೋಗ ಮತ್ತು ಮಕ್ಕಳಿಗೆ ಅಧಿಕಾರವನ್ನು ನೀಡುವುದು ಮುಖ್ಯವಾಗಿದೆ ಏಕೆಂದರೆ ಅದು ಅವರಿಗೆ ಶಕ್ತಿಯುತ ಮತ್ತು ಅದೇ ಸಮಯದಲ್ಲಿ ಕಾಳಜಿಯುಳ್ಳ ಆಜೀವ ಕೌಶಲ್ಯಗಳನ್ನು ಕಲ್ಪಿಸಿಕೊಡುತ್ತದೆ.
ಮುಖ್ಯ ಅತಿಥಿ ಗಳಾಗಿ ಡಾ|| ರಾಯ್ಸನ್ ಥಾಮಸ್, ಪ್ರೊಫೆಸರ್, ಪೆರಿಒಡೋಂಟಿಕ್ಸ್. ಹಾಗೂ ಗೌರವ ಅತಿಥಿ ಗಳಾಗಿ ಪ್ರಕಾಶ್ ಪಿ. ಬಿ. ಡಿವೈಎಸ್ಪಿ ರವರು ಉಪಸ್ಥಿತರಿದ್ದರು. ಪದವಿದಾನ ಕಾರ್ಯಕ್ರಮ ವನ್ನು ಶಾಲೆಯ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿವರ್ಗ ಉತ್ತಮವಾಗಿ ಆಯೋಜಿಸಿದ್ದರು.