ದಾವಣಗೆರೆ ಸಂಚಾರ ಪೊಲೀಸರಿಂದ ಇಂದು ಹೆಲ್ಮೆಟ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ನಮ್ಮ ದಾವಣಗೆರೆ ಫೆ. 21: ದಾವಣಗೆರೆ ಸಂಚಾರ ಪೊಲೀಸರಿಂದ ಇಂದು ಹೆಲ್ಮೆಟ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು, ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು ಸಂಚಾರಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಐ ಎಸ್ ಐ ಮಾರ್ಕ್ ವುಳ್ಳ ಗುಣಮಟ್ಟದ ಹೆಲ್ಮೆಟ್ ಗಳನ್ನು ವಿತರಿಸಿದರು.

ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಐ ಎಸ್ ಐ ಮಾರ್ಕ್ ಹೆಲ್ಮೆಟ್ ಗಳನ್ನೆ ಧರಿಸಲು ಸೂಚಿಸಿದರು. ನಂತರ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರು, ನಗರ ಪೊಲೀಸ್ ಉಪಧೀಕ್ಷಕರಾದ ಶ್ರೀ ಮಲ್ಲೇಶ್ ದೊಡ್ಮನಿ ರವರು, ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಅನಿಲ್ ರವರು, ಆರ್ ಪಿ ಐ ಶ್ರೀ ಸೋಮಶೇಖರ, ಪಿ ಎಸ್ ಐ ರವರುಗಳಾದ ವಿರಬಸಪ್ಪ ಕುಸಲಾಪುರ, ಜಯಪ್ಪ ನಾಯ್ಕ್, ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!