ನಮ್ಮ ದಾವಣಗೆರೆ ಸೆ. 24: ದಿನಾಂಕ: 13-09-2023 ರಂದು ಒಂಟಿ ಮಹಿಳೆ ಮತ್ತು ಅವರ ಮಗನ ಮೇಲೆ ಹಲ್ಲೆ ಮಾಡಿ ಹಣ ದೋಚಿಕೊಂಡು ಹೋಗಿದ್ದ ಪ್ರಕರಣವನ್ನು ಇಂದು ವಿದ್ಯಾನಗರ ಪೊಲೀಸರು ಪ್ರಕರಣವನ್ನು ಬೇಧಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿಂತೆ ದಾವಣಗೆರೆ ಪೊಲೀಸ್ ತಂಡವು ಮುಬಾರಕ್ ಎಂ. @ ಬಾಬು @ ಸಾಹಿಲ್ ಎಂಬ ೨೨ ವರ್ಷದ ಆರೋಪಿಯನ್ನು ಬಂದಿಸಿರುತ್ತಾರೆ. ಆರೋಪಿತನಿಂದ 2,17,,500 ರೂ ನಗದು ಹಾಗೂ ಕದ್ದ ಹಣದಿಂದ 26000 ಸಾವಿರ ರೂ. ಬೆಲೆಯ ವಿಮೋ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಗಂಭೀರವಾಗಿ ಪರಿಗಣಿಸಿದ್ದ ಪ್ರಕರಣದಲ್ಲಿ ಆರೋಪಿತನನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್. ಬಿ. ಬಸರಗಿ ರವರು ಶ್ಲಾಘಿಸಿರುತ್ತಾರೆ.