ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಜತೆಗೆ ಪ್ರಕೋಷ್ಠಗಳ ಸಂಯೋಜಕರು, ಕಾರ್ಯಾಲಯ ಉಸ್ತುವಾರಿಗಳನ್ನೂ ನೇಮಿಸಿದ್ದಾರೆ. 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 30 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರುಗಳನ್ನ ನೇಮಕ ಮಾಡಲಾಗಿದೆ, ಇನ್ನಿತರೇ 9 ಜಿಲ್ಲೆಗಳಿಗೆ ಹಿಂದಿನ ಜಿಲ್ಲಾಧ್ಯಕ್ಷರನ್ನೇ ಮತ್ತೊಂದು ಅವಧಿಗೆ ಮುಂದುವರಿಸಲಾಗಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕದಲ್ಲೂ ಮಾಜಿ ಸಚಿವ ಸೋಮಣ್ಣ ಪುತ್ರರನ್ನ ಕಡೆಗಣಿಸಲಾಗಿದೆ. ವಿಜಯಪುರ ಜಿಲ್ಲೆಗೆ ಶಾಸಕ ಬಸನಗೌಡ ಯತ್ನಾಳ್ ಆಪ್ತನನ್ನೇ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮುಂದುವರಿಸಲಾಗಿದೆ. ಹಾಲಿ ಅಧ್ಯಕ್ಷರಾಗಿರುವ ಆರ್ಎಸ್ ಪಾಟೀಲ್ರನ್ನೇ ಬಿಜೆಪಿ ಹೈಕಮಾಂಡ್ ಮುಂದುವರಿಸಿದೆ.
ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?
ಜಿಲ್ಲೆಯ ಹೆಸರು | ನೂತನ ಅಧ್ಯಕ್ಷರು |
ಮೈಸೂರು ನಗರ | ಎಲ್.ನಾಗೇಂದ್ರ |
ಮೈಸೂರು ಗ್ರಾಮಾಂತರ | ಎಲ್.ಆರ್.ಮಹಾದೇವಸ್ವಾಮಿ |
ಚಾಮರಾಜನಗರ | ಸಿ.ಎಸ್.ನಿರಂಜನ್ ಕುಮಾರ್ |
ಮಂಡ್ಯ | ಇಂದ್ರೇಶ್ ಕುಮಾರ್ |
ಹಾವೇರಿ | ಅರುಣ್ ಕುಮಾರ್ ಪೂಜಾರ |
ಧಾರವಾಡ ಗ್ರಾಮಾಂತರ | ನಿಂಗಪ್ಪ ಸುತ್ತಗಟ್ಟಿ |
ಬೆಳಗಾವಿ ನಗರ | ಗೀತಾ ಸುತಾರ್ |
ಬೆಳಗಾವಿ ಗ್ರಾಮಾಂತರ | ಸುಭಾಷ್ ಪಾಟೀಲ್ |
ಚಿಕ್ಕೋಡಿ | ಸತೀಶ್ ಅಪ್ಪಾಜಿಗೋಳ್ |
ಬಾಗಲಕೋಟೆ | ಶಾಂತಗೌಡ ಪಾಟೀಲ್ |
ವಿಜಯಪುರ | ಆರ್.ಎಸ್.ಪಾಟೀಲ್ |
ಬೀದರ್ | ಸೋಮನಾಥ ಪಾಟೀಲ್ |
ದಾವಣಗೆರೆ | ರಾಜಶೇಖರ್ ನಾಗಪ್ಪ |
ತುಮಕೂರು | ಎಚ್.ಎಸ್.ರವಿಶಂಕರ(ಹೆಬ್ಬಾಕ) |
ಬೆಂಗಳೂರು ಗ್ರಾಮಾಂತರ | ರಾಮಕೃಷ್ಣಪ್ಪ |
ಚಿಕ್ಕಬಳ್ಳಾಪುರ | ರಾಮಲಿಂಗಪ್ಪ |
ಕೋಲಾರ | ಡಾ.ಕೆ.ಎನ್.ವೇಣುಗೋಪಾಲ್ |
ಬೆಂಗಳೂರು ಉತ್ತರ | ಎಸ್.ಹರೀಶ್ |
ಬೆಂಗಳೂರು ಕೇಂದ್ರ | ಸಪ್ತಗಿರಿಗೌಡ |
ಬೆಂಗಳೂರು ದಕ್ಷಿಣ | ಕೆ.ಸಿ.ರಾಮಮೂರ್ತಿ |
ರಾಮನಗರ | ಆನಂದಸ್ವಾಮಿ |
ಮಧುಗಿರಿ | ಬಿ.ಸಿ.ಹನುಮಂತೇಗೌಡ |
ಚಿತ್ರದುರ್ಗ | ಎ.ಮುರಳಿ |
ವಿಜಯನಗರ | ಚನ್ನಬಸವನಗೌಡ ಪಾಟೀಲ್ |
ಬಳ್ಳಾರಿ | ಅನಿಲ್ ಕುಮಾರ್ ಮೋಕಾ |
ರಾಯಚೂರು | ಡಾ.ಶಿವರಾಜ ಪಾಟೀಲ್ |
ಕೊಪ್ಪಳ | ನವೀನ್ ಗುಳಗಣ್ಣನವರ್ |
ಯಾದಗಿರಿ | ಅಮೀನ್ ರೆಡ್ಡಿ |
ಕಲಬುರಗಿ ಗ್ರಾಮಾಂತರ | ಶಿವರಾಜ ಪಾಟೀಲ್ ರದ್ದೇವಾರಿ |
ಕಲಬುರಗಿ ನಗರ | ಚಂದ್ರಕಾಂತ ಪಾಟೀಲ್ |
ಗದಗ | ರಾಜು ಕುರಡಗಿ |
ಹುಬ್ಬಳ್ಳಿ-ಧಾರವಾಡ | ತಿಪ್ಪಣ್ಣ ಮಜ್ಜಗಿ |
ಉತ್ತರ ಕನ್ನಡ | ಎನ್.ಎಸ್.ಹೆಗಡೆ |
ಶಿವಮೊಗ್ಗ | ಟಿ.ಡಿ.ಮೇಘರಾಜ್ |
ಚಿಕ್ಕಮಗಳೂರು | ದೇವರಾಜ ಶೆಟ್ಟಿ |
ಉಡುಪಿ | ಕಿಶೋರ್ ಕುಂದಾಪುರ |
ದಕ್ಷಿಣ ಕನ್ನಡ | ಸತೀಶ್ ಕುಂಪಲ |
ಕೊಡಗು | ರವಿ ಕಾಳಪ್ಪ |
ಹಾಸನ | ಸಿದ್ದೇಶ್ ನಾಗೇಂದ್ರ |
ಇತರೆ ಪ್ರಮುಖ ಹುದ್ದೆಗಳು:
- ಪ್ರಕೋಷ್ಠಗಳ ರಾಜ್ಯ ಸಂಯೋಜಕ: ಎಸ್.ದತ್ತಾತ್ರಿ
- ರಾಜ್ಯ ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್ ಅಂಬೇಕಲ್ಲು
- ರಾಜ್ಯ ಕಾರ್ಯಾಲಯ ಸಹ ಕಾರ್ಯದರ್ಶಿ: ಬಿ.ಎಚ್. ವಿಶ್ವನಾಥ್